Saturday, July 21, 2012

ಇಡಿ ಊರಪ್ಪನ ನುಡಿ


ಕರಾವಳಿ ಮುಂಜಾವು : ಶುಕ್ರವಾರ ೨೦ ನೇ ಜುಲೈ ೨೦೧೨

ಇಡಿ ಊರಪ್ಪನ ನುಡಿ 


ಎಡೆಯ ಊರಿಗೂ ಇಡಿಯ ನಾಡಿಗೂ
ಅಪ್ಪಂತನು ನಾನೆ
ಎಲ್ಲಿದ್ದರೆಯೇನು ಎಂತಿದ್ದರೆಯೇನು
ಊರಪ್ಪನು ತಾನೆ.

ಹಾಯ್ ಕಮಾಂಡುಯೆಂದರೆ ಯಾರವರು?
ನಮ್ಮವರೇ ತಾನೆ
ಅವರಿದ್ದರೆಯೇನು ಇರದಿದ್ದರೆಯೇನು
ಮಾಮಂತ್ರಿಯುನಾನೆ.

ಸ್ವಜಾತಿ ಸ್ವಾಮಿಯು ಭೂಮಿಯ ಕಾಮಿಯು
ಇವರಿಬ್ಬರೆ ಸಾಕು
ಇಡಿಯೂರಪ್ಪನ ಖುರ್ಚಿಯು ಕಡುಭದ್ರ
ಚಿಂತೆಯನಾಕಡೆ ನೂಕು.

ಲಂಚವ ತಿನ್ನದ ಮಂಚವನೇರದ
ಅಪ್ಪಂತರು ಯಾರಪ್ಪ?
ಬಣ್ಣಣೆ ಮಾತನು ಹೊರಗಡೆ ಬೀರಿ
ಸಿಕ್ಕಿದ್ದೆಲ್ಲಾ ಮುಕ್ಕಪ್ಪ.

ನಾನಿಡಿಯೂರಿಗೆ ಅಪ್ಪಂತನೆನ್ನುವ
ನುಡಿ ಡಂಗುರ ಸಾರಪ್ಪ
ಡೊಂಬರ ಆಟದ ಮಾತಲ್ಲಿದು ನಿಜ
ನಜಭಂಡನ ಡೋಲಪ್ಪ.

                                                      ಡಾ. ಎನ್. ಆರ್. ನಾಯಕ
                                                     ಜಾನಪದ ಪ್ರಕಾಶನ
                                                     ಉದಯಗಿರಿ, ಹೊನ್ನಾವರ -೫೮೧೩೩೪ (ಉ.ಕ.)
                       Ph: 08387-220474, 9901921650 
                       janapadap86@gmail.com

Friday, July 20, 2012

ಜ್ಯೋತಿ ನಾಯಕರಿಗೆ ಪಿಎಚ್.ಡಿ. ಪದವಿ


ಪ್ರಜಾವಾಣಿ : ಶನಿವಾರ ೨೧ ನೇ ಜುಲೈ ೨೦೧೨ 

ಜ್ಯೋತಿ ನಾಯಕರಿಗೆ ಪಿಎಚ್.ಡಿ. ಪದವಿ


           ಹೊನ್ನಾವರ : ಡಾ. ಎನ್. ಆರ್. ನಾಯಕ : ಸಾಹಿತ್ಯ ಮತ್ತು ಜಾನಪದ ಅಧ್ಯಯನದ ನೆಲೆಗಳು ಎಂಬ ವಿಷಯದ ಮೇಲೆ ಮಂಡಿಸಿದ ಮಹಾಪ್ರಬಂಧವನ್ನು ಮನ್ನಿಸಿ ಕರ್ನಾಟಕ ವಿಶ್ವವಿದ್ಯಾಲಯ ಜ್ಯೋತಿ ನಾಯಕ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ನೀಡಿದೆ. 



ಮೂಲತಃ ಅಂಕೋಲಾ ತಾಲೂಕಿನ ಸಿಂಗನಮಕ್ಕಿಯವರಾದ ಜ್ಯೋತಿ ನಾಯಕ ಕವಿವಿ ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಧ್ಯಾಪಕ ಡಾ. ಎನ್. ವೈ. ಮಟ್ಟಿಹಾಳ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಸಾದರಪಡಿಸಿದ್ದರು. 

       ತಮ್ಮ ಸಾಹಿತ್ಯ ಹಾಗೂ ಜಾನಪದ ಅಧ್ಯಯನದ ನೆಲೆಯ ಕುರಿತು ಸಂಶೋಧನೆ ಕೈಗೊಂಡು ಪಿಎಚ್.ಡಿ. ಪದವಿ ಪಡೆದ ಜ್ಯೋತಿ ಅವರಿಗೆ ಹಿರಿಯ ಜಾನಪದ ವಿದ್ವಾಂಸ ಡಾ. ಎನ್. ಆರ್. ನಾಯಕ ಅಭಿನಂದನೆ ಸಲ್ಲಿಸಿದ್ದಾರೆ.