ಪ್ರಜಾವಾಣಿ : ಶನಿವಾರ ೨೧ ನೇ ಜುಲೈ ೨೦೧೨
ಜ್ಯೋತಿ ನಾಯಕರಿಗೆ ಪಿಎಚ್.ಡಿ. ಪದವಿ
ಹೊನ್ನಾವರ : ಡಾ. ಎನ್. ಆರ್. ನಾಯಕ : ಸಾಹಿತ್ಯ ಮತ್ತು ಜಾನಪದ ಅಧ್ಯಯನದ ನೆಲೆಗಳು ಎಂಬ ವಿಷಯದ ಮೇಲೆ ಮಂಡಿಸಿದ ಮಹಾಪ್ರಬಂಧವನ್ನು ಮನ್ನಿಸಿ ಕರ್ನಾಟಕ ವಿಶ್ವವಿದ್ಯಾಲಯ ಜ್ಯೋತಿ ನಾಯಕ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ನೀಡಿದೆ.
ಮೂಲತಃ ಅಂಕೋಲಾ ತಾಲೂಕಿನ ಸಿಂಗನಮಕ್ಕಿಯವರಾದ ಜ್ಯೋತಿ ನಾಯಕ ಕವಿವಿ ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಧ್ಯಾಪಕ ಡಾ. ಎನ್. ವೈ. ಮಟ್ಟಿಹಾಳ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಸಾದರಪಡಿಸಿದ್ದರು.
ತಮ್ಮ ಸಾಹಿತ್ಯ ಹಾಗೂ ಜಾನಪದ ಅಧ್ಯಯನದ ನೆಲೆಯ ಕುರಿತು ಸಂಶೋಧನೆ ಕೈಗೊಂಡು ಪಿಎಚ್.ಡಿ. ಪದವಿ ಪಡೆದ ಜ್ಯೋತಿ ಅವರಿಗೆ ಹಿರಿಯ ಜಾನಪದ ವಿದ್ವಾಂಸ ಡಾ. ಎನ್. ಆರ್. ನಾಯಕ ಅಭಿನಂದನೆ ಸಲ್ಲಿಸಿದ್ದಾರೆ.
No comments:
Post a Comment